ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಪರಪಂಚ ಚಿತ್ರಕ್ಕಾಗಿ ಯೋಗರಾಜ್ಭಟ್ ಅವರು ಬರೆದಿರುವ ‘ಬಾಯ್ ಬಸಳೆ ಸೊಪ್ಪು ಆಲುಗಡ್ಡೆ ಈರುಳ್ಳಿ ಮೈಸೂರು ಸ್ಯಾಂಡಲ್ ಸೋಪು ಕೊಬ್ರಿ ಎಣ್ಣೆ ಈ ರೇಷನ್ನು ಚೀಟಿನ ಜೇಬಲಿಟ್ಕೊಂಡು ಅಂಗಡಿಗೆ ಹೋಗು ಬದ್ಲು ಇಲ್ಲ್ ಬಂದ್ರಿ ಹೌದ್ ಹೌದ್ರಿ ಎಂಬ ಹಾಡನ್ನು ಹುಚ್ಚ ವೆಂಕಟ್ ಹಾಡಿದ್ದಾರೆ. ಈ ಹಾಡಿನಲ್ಲಿ ಅವರೇ ಅಭಿನಯಿಸುತ್ತಿರುವುದು ವಿಶೇಷ. ಸದ್ಯದಲ್ಲೇ ‘ಪರಪಂಚ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹಲವು ವರ್ಷಗಳಿಂದ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ‘ಗಾಂಧಿಸ್ಮೈಲ್ ಚಿತ್ರದ ನಿರ್ದೇಶಕರೂ ಆಗಿರುವ ಕ್ರಿಶ್ಜೋಶಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ‘ಪರಪಂಚಕ್ಕೆ ವೆಜ್ ಎಂಡ್ ನಾನ್ವೆಜ್ ಎಂಬ ಅಡಿಬರಹವಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ ಹಾಗೂ ಶಶಿಧರ್ ಅಡಪರ ಕಲಾ ನಿರ್ದೇಶನ ‘ಪರಪಂಚಕ್ಕಿದೆ. ದಿಗಂತ್, ರಾಗಿಣಿ. ದತ್ತಣ್ಣ, ಅನಂತನಾಗ್, ವಿ.ಮನೋಹರ್, ಅಶೋಕ್, ಯೋಗರಾಜ್ಭಟ್, ಪಂಚರಂಗಿ ಸುಧಾಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.